Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದ್ಯಾನನಗರಿಯಲ್ಲಿ `ಸಾಧಕರು`
Posted date: 17 Tue, Apr 2012 ? 09:22:21 AM

ಎಸ್.ಎಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಅಮರನಾಥ ಹಾಗೂ ಕೊಟ್ರೇಶ್ ನಿರ್ಮಿಸುತ್ತಿರುವ ‘ಸಾಧಕರು ಚಿತ್ರ ಕಳೆದವಾರ ಬಳೇಪೇಟೆ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು. ಪ್ರಥಮ ಸನ್ನಿವೇಶಕ್ಕೆ ಚಲನಚಿತ್ರ ಮಾಧ್ಯಮ ಅಕಾಡಮಿ ಅಧ್ಯಕ್ಷೆ ತಾರಾವೇಣು ಆರಂಭ ಫಲಕ ತೋರಿದರು. ಶಾಸಕ ದಿನೇಶ್ ಗುಂಡೂರಾವ್ ಕ್ಯಾಮೆರಾ ಚಾಲನೆ ಮಾಡಿದರು.
     ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಇಪ್ಪತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
     ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕಲಾವಿದರಾಗಿ ನಟಿಸಿರುವ ಎಚ್.ಎನ್.ಸೋಮನಾಥ ಈ ಚಿತ್ರದ ನಿರ್ದೇಶಕರು. ಗೌರಿ ವೆಂಕಟೇಶ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಕಿರಣ್ ಭಟ್ ಸಂಗೀತ ನೀಡಿದ್ದಾರೆ. ಕೊಟ್ರೇಶ್, ಶೋಭಿನಾ, ಹೊನ್ನವಳ್ಳಿ ಕೃಷ್ಣ, ಎಚ್.ಎಸ್.ಸೋಮನಾಥ್, ಅಮರನಾಥ, ಹರ್ಷವರ್ಧನ, ಮಿಮಿಕ್ರಿ ರಾಜಗೋಪಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದ್ಯಾನನಗರಿಯಲ್ಲಿ `ಸಾಧಕರು` - Chitratara.com
Copyright 2009 chitratara.com Reproduction is forbidden unless authorized. All rights reserved.